ಕೊಲೆಗಾರ ಪ್ರೇಮಿಯನ್ನು ತಿರಸ್ಕರಿಸಿದ ರಶ್ಮಿ
Posted date: 10 Tue, Sep 2013 – 08:57:21 AM

ತನ್ನ ಪ್ರೇಮಿ ಒಬ್ಬ ಕೊಲೆಗಾರನಾಗಲು ಯಾವ ಹೆಣ್ಣು ಇಷ್ಟ ಪಡುವುದಿಲ್ಲ.  ತನ್ನೆದುರೇ ಖಳನಾಯಕನನ್ನು ಹತ್ಯೆಗೈದ ನಾಯಕ ಲಿಖಿತ್ ರಾಜ್‌ನನ್ನು ನಾಯಕಿ ದುನಿಯಾ ರಶ್ಮಿ ನೀನಿಂಥವನೆಂದು ತಿಳಿದಿರಲಿಲ್ಲ.  ನೀನೊಬ್ಬ ಕೊಲೆಗಾರ, ಮೋಸಗಾರ ರೌಡಿ ಎಂದು ತನ್ನ ಪ್ರೇಮಿಯನ್ನು ದೂರ ತಳ್ಳಿ ಹೊರಟುಹೋಗುತ್ತಾಳೆ.  ಓಂ ಸಾಯಿಪ್ರಕಾಶ್ ನಿರ್ದೇಶಿಸುತ್ತಿರುವ ಆಕ್ಷನ್ ಚಿತ್ರಕ್ಕಾಗಿ ಕಳೆದ ವಾರ ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.  
ನಿಮಿಷಾಂಭ ಸಿನಿ ಕಂಪೆನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಮ್.ನೀಲ್ ಸಂಗೀತ, ಜಿ.ರೇಣುಕುಮಾರ್ ಛಾಯಾಗ್ರಹಣ, ವಿಜಯಕುಮಾರ್.ಎಂ.ಸಿ. ಕಥೆ, ಚಿತ್ರಕಥೆ, ಸಂಭಾಷಣೆ, ಕೌರವ ವೆಂಕಟೇಶ್, ಢಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನ, ಮರಿಸ್ವಾಮಿ ಸಂಕಲನ, ಗೌಸ್‌ಫೀರ್, ಶಿವು ಬೇರ್ಗಿ, ಸಾಹಿತ್ಯ, ಜಿ.ಮೂರ್ತಿ ಕಲೆ, ಲಿಂಗರಾಜ್ ಕಗ್ಗಲ್, ಶಶಿ ಸಹ ನಿರ್ದೇಶನವಿದೆ.  ಸಾಯಿಕುಮಾರ್ ಲಿಖಿತರಾಜ್ ಅರಸ್, ದುನಿಯಾ ರಶ್ಮಿ, ಸಾಧುಕೋಕಿಲ, ಪದ್ಮಜಾ ರಾವ್, ಶಂಕರ್ ಅಶ್ವತ್, ವಿಜಯ್ ಹಾಸನ್, ಸತ್ಯಜಿತ್, ರಾಜು ತಾಳಿಕೋಟೆ, ಮೈಕೋ ನಾಗರಾಜ್,  ಪೆಟ್ರೋಲ್ ಪ್ರಸ್ನನ್ನ ತಾರಾಗಣವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed